ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ, ಚೀನಾಕ್ಕೆ ಭಾರತದ ಕೃಷಿ ರಫ್ತು ಶೇ. 70 ರಷ್ಟು ಏರಿಕೆ ಕಂಡಿದೆ. ಯುಎಸ್ ಜೊತೆ ಸ್ಥಿರವಾದ ವ್ಯಾಪಾರದ ಪ್ರವಾಹ ಕಾಲದಲ್ಲಿ; ಭಾರತೀಯ ಕೃಷಿ ಉತ್ಪಾದನೆಗೆ ಚೀನಾ ಸ್ವಲ್ಪ ಹೆಚ್ಚು ತೆರೆದುಕೊಂಡಿದೆ. ಚೀನಾ ಸುಮಾರು 8.7 ಬಿಲಿಯನ್ ವಾರ್ಷಿಕ ಕೃಷಿ ಆಧಾರಿತ ಉತ್ಪನ್ನಗಳ ಆಮದಿಗೆ ಜಾಗವನ್ನು ನೀಡಿದೆ. ವಾಸ್ತವವಾಗಿ ವಾಷಿಂಗ್ಟನ್ ಬೀಜಿಂಗ್ ನ ಸುಂಕದ ವಿವಾದದ ಮಧ್ಯೆ ಇದೊಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಭಾರತೀಯ ಕೃಷಿ ಆಧಾರಿತ ಉತ್ಪನ್ನಗಳಿಗೆ ಅನೇಕ ದೇಶಗಳು ತಮ್ಮ ಬಾಗಿಲುಗಳನ್ನು ತೆರೆಯುವ ಮೂಲಕ ವಿಶ್ವಾದ್ಯಂತ ಅಂಗೀಕಾರವನ್ನು ಪಡೆಯುತ್ತಿದೆ. ಕೃಷಿ ಮತ್ತು ಸಂಸ್ಕರಿಸಿದಆಹಾರ ಉತ್ಪನ್ನಗಳು ರಫ್ತು ಪ್ರಾಧಿಕಾರ (ಎಪಿಇಡಿಎ) ತನ್ನ ವರದಿಯಲ್ಲಿ ಭಾರತೀಯ ಕೃಷಿ ಉತ್ಪನ್ನಗಳು ಏಪ್ರಿಲ್-ನವೆಂಬರ್ 2018 ರಲ್ಲಿ 453 ಕೋಟಿ ರೂ.ತಲುಪಿದೆ. 2017ರ ಇದೇ ಅವಧಿಯಲ್ಲಿ ಇದೇ ಅವಧಿಯಲ್ಲಿ 267 ಕೋಟಿ ರೂ ವ್ಯವಹಾರ ನಡೆದಿತ್ತು.. ಇದು ಶೇ 69 ಬೆಳವಣಿಗೆ ಸಾಧಿಸಿದೆ. ಮುಂದಿನ ಮೂರು ತಿಂಗಳಲ್ಲಿ ಪೂರ್ಣ ಆರ್ಥಿಕತೆಗೆ ಭಾರತೀಯ ಕೃಷಿಆಧಾರಿತ ಉತ್ಪನ್ನಗಳ ರಫ್ತು ದ್ವಿಗುಣವಾಗಬಹುದು ಎಂದು ದತ್ತಾಂಶ ಪ್ರವೃತ್ತಿಗಳು ಸೂಚಿಸುತ್ತವೆ.
ಚೀನಾ ಮತ್ತು ಯುಎಸ್ ನಡುವಿನ ವ್ಯಾಪಾರದ ಕುಸಿತವನ್ನು ವಿಶ್ವ ನೋಡುತ್ತಿದೆ. ಯುಎಸ್ ಸೋಯಾಬೀನ್ ಮೇಲೆ ಚೀನಾ 25 ಶೇಕಡಾ ತೆರಿಗೆ ವಿಧಿಸಿದೆ. ಅದೇ ಸಮಯದಲ್ಲಿಬೀಜಿಂಗ್ ಏಷ್ಯಾದ ದೇಶಗಳಿಂದ ಸೋಯಾಬೀನ್ ಮೇಲಿನ ಪ್ರವೇಶ ತಡೆಗಳನ್ನು ತೆಗೆದುಹಾಕಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ಹೀಗೆ ಭಾರೀ ಸಂಖ್ಯೆಯ ರೈತರುಸೋಯಾಬೀನ್ ಸಾಗುವಳಿಗಳನ್ನು ಕೊಳ್ಳುತ್ತಿದ್ದಾರೆ.
ಚೀನಾವು ಅಕ್ಕಿ ಆಮದುದಾರನಾಗಿದ್ದು. ಭಾರತವು ಹೆಚ್ಚುವರಿ ಅಕ್ಕಿ ಉತ್ಪಾದಿಸುತ್ತದೆ. ಭಾರತೀಯ ರಫ್ತುಗಳಿಗೆ ಹೆಚ್ಚು ರೆಕ್ಕೆಗಳನ್ನು ನೀಡುತ್ತಿರುವ ಚೀನಾ, ಇತ್ತೀಚೆಗೆ ಬಾಸ್ಮಾತಿ ಅಲ್ಲದಅಕ್ಕಿ ಆಮದು ಮಾಡಲು ಅವಕಾಶ ನೀಡಿತು. ಇದಲ್ಲದೆ, ಭಾರತ ಈಗ ಚೀನಾಕ್ಕೆ ಬೇಳೆಕಾಳುಗಳನ್ನು ರಫ್ತು ಮಾಡುತ್ತಿದೆ. ರೈತರಿಗೆ ಪ್ರೋತ್ಸಾಹಕಗಳೊಂದಿಗೆ ಒಂದು ನಿರ್ಣಾಯಕದಿಕ್ಕಿನಲ್ಲಿ ಹೆಚ್ಚುವರಿ ಆದಾಯವನ್ನು ಅನುಮತಿಸಲು ಭಾರತವು ಇತ್ತೀಚಿನ ವರ್ಷಗಳಲ್ಲಿ ದಾಖಲೆಯ ದ್ವಿದಳ ಧಾನ್ಯಗಳನ್ನು ಉತ್ಪಾದಿಸಲು ಸಹಾಯ ಮಾಡಿದೆ.
ಆದಾಗ್ಯೂ, ಭಾರತವು ಚೀನಾದೊಂದಿಗಿನ ಅತಿ ಹೆಚ್ಚು ವ್ಯಾಪಾರ ಕೊರತೆಯನ್ನು ಹೊಂದಿದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಆರ್ಥಿಕ ಕೊರತೆಯು ಕಳೆದ ಆರ್ಥಿಕ ವರ್ಷದಲ್ಲಿ63 ಶತಕೋಟಿ ಡಾಲರ್ ಗಳಿಗೆ ತಲುಪಿತ್ತು ಮತ್ತು ಇದು ಸರ್ಕಾರವನ್ನು ಎಚ್ಚರಿಸಿತು. ಈ ಪ್ರಮಾಣದ ಕೊರತೆ ಸರಿಯಲ್ಲ ಎಂದು ಚೀನಾಕ್ಕೆ ಭಾರತ ತಿಳಿಸಿತ್ತು. ಅಕ್ಕಿ ಸೇರಿದಂತೆ ಕೃಷಿಆಧಾರಿತ ಉತ್ಪನ್ನಗಳನ್ನು ರಫ್ತು ಮಾಡಲು ಭಾರತವು ಚೀನಾದಿಂದ ಅವಕಾಶ ಕೇಳಿತ್ತು.
ರಾಜತಾಂತ್ರಿಕ ಪ್ರಯತ್ನಗಳು ಈಗ ಅದರ ಪ್ರಭಾವವನ್ನು ತೋರಿಸುತ್ತಿದೆ. ಏಪ್ರಿಲ್-ಅಕ್ಟೋಬರ್, 2018 -19 ರ ಅವಧಿಯಲ್ಲಿ ವ್ಯಾಪಾರದ ಕೊರತೆಯು ಕಡಿಮೆಯಾಗಿದೆ. ಕಳೆದ ವರ್ಷಇದೇ ಅವಧಿಯಲ್ಲಿ 36 ಶತಕೋಟಿ ಯುಎಸ್
ಬರಹ: ಮನೀಶ್ ಆನಂದ್, ಹಿರಿಯ ವಿಶೇಷ ವರದಿಗಾರ, ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್