ಈಚೆಗಷ್ಟೇ ಮುಕ್ತಾಯವಾದ ಪೆಟ್ರೋಟೆಕ್ 2019ರ ಒಂದು ಪ್ರಮುಖ ಅಂಶವೆಂದರೆ ವೆನೆಜುವೆಲಾ ಭಾರತಕ್ಕೆ ಮಾಡುವ ತೈಲ ರಫ್ತುಗಳನ್ನು ದ್ವಿಗುಣಗೊಳಿಸಲಿದೆ. ಭಾರತಕ್ಕೆ ತೈಲ ರಫ್ತನ್ನು ದ್ವಿಗುಣಗೊಳಿಸುವಂತೆ ರಿಫೈನರಿಗಳನ್ನು ಮನವೊಲಿಸುವ ಉದ್ದೇಶದಿಂದ ವೆನಿಜುವೆಲಾ ತನ್ನ ದೇಶದ ತೈಲ ಸಚಿವ ಮ್ಯಾನ್ಯುವಲ್ ಕ್ವೆವೆಡೋ ಅವರನ್ನು ಪೆಟ್ರೋಟೆಕ್ ಗೆ ಕಳುಹಿಸಿಕೊಟ್ಟಿತ್ತು. ವಾಸ್ತವದಲ್ಲಿ ವೆನೆಜುವೆಲಾ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಪೂರ್ವ ನಿಗದಿಯಾಗಿರಲಿಲ್ಲ. ಇರಾನ್ ನಿಂದ ತೈಲ ಪೂರೈಕೆಗೆ ಅಮೆರಿಕ ನಿಷೇಧ ಹೇರಿಸುವ ಈ ಸನ್ನಿವೇಶದಲ್ಲಿ ವೆನೆಜುವೆಲಾ ಈ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ.
ವೆನೆಜುವೆಲಾ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಮೆರಿಕ ಮತ್ತು ಬಹುತೇಕ ಪಾಶ್ಚಾತ್ಯ ದೇಶಗಳು ಈ ದೇಶದ ವಿರುದ್ಧ ನಿಷೇಧ ಹೇರಿವೆ. ಇದರಿಂದಾಗಿ ದೇಶದ ಆರ್ಥಿಕ ಸ್ಥಿತಿಗತಿಗಳ ಮೇಲೆ ಪರಿಣಾಮವಾಗಲಿದೆ. ಅಲ್ಲದೆ ತೈಲ ಆದಾಯಕ್ಕೂ ಹಾನಿಯಾಗಲಿದೆ. ಕಳೆದ ತಿಂಗಳಿಂದ ನಿಷೇಧ ಜಾರಿಗೆ ಬಂದಿರುವುದರಿಂದ ದಕ್ಷಿಣ ಅಮೆರಿಕದ ಈ ದೇಶದಲ್ಲಿ ತೈಲ ರಫ್ತು ಕಡಿಮೆಯಾಗಿದ್ದು, ನಗದಿನ ಮೂಲಕ ತೈಲ ಖರೀದಿ ಮಾಡುವವರತ್ತ ವೆನೆಜುವೆಲಾ ಮುಖ ಮಾಡಿದೆ. ಅಮೆರಿಕ ನಂತರ ಭಾರತ ಈ ದೇಶದಿಂದ ಅತಿ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.
ಕಳೆದ ಕಾಲು ಶತಮಾನದಲ್ಲಿ ಪೆಟ್ರೋಟೆಕ್ ವೇದಿಕೆಯು ಭಾರತದ ಇಂಧನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನೆರವಾಗಿದೆ. ಇಂಧನ ಕ್ಷೇತ್ರದ ಭವಿಷ್ಯದ ಬಗ್ಗೆ ದೂರದೃಷ್ಟಿ ಹೊಂದಲು ಪೆಟ್ರೋಟೆಕ್ ವೇದಿಕೆ ನಿರ್ಮಾಣ ಮಾಡಿಕೊಡುವುದಲ್ಲದೆ ಜಾಗತಿಕವಾಗಿ ಆಗುತ್ತಿರುವ ಬದಲಾವಣೆಗಳು, ಹೊಸ ತಂತ್ರಜ್ಞಾನಗಳ ಮೂಲಕ ಮಾರುಕಟ್ಟೆಗಳಿಗೆ ಪ್ರಭಾವ ಬೀರುತ್ತಿದೆ. ಆ ಮೂಲಕ ಮಾರುಕಟ್ಟೆ ಸ್ಥಿರತೆ ಹಾಗೂ ಈ ಕ್ಷೇತ್ರದಲ್ಲಿನ ಭವಿಷ್ಯದ ಹೂಡಿಕೆಗೂ ನೆರವಾಗುತ್ತಿದೆ.
ಈ ಬಾರಿಯ ಪೆಟ್ರೋಟೆಕ್ ನ ಪ್ರಮುಖ ಬೆಳವಣಿಗೆ ಏನೆಂದರೆ ಭಾರತದ ತೈಲ ಕಂಪನಿ ಹಾಗೂ ಅಬುಧಾಬಿ ನ್ಯಾಶನಲ್ ಆಯಿಲ್ ಕಂಪನಿ (ಎಡಿಎನ್ಒಸಿ) ನಡುವಿನ ಒಪ್ಪಂದವಾಗಿರುವುದು. ಕರ್ನಾಟಕದ ಪಾದೂರಿನಲ್ಲಿ ಭಾರತವು ನಿರ್ಮಿಸಿದ 2.5 ಮಿಲಿಯನ್ ಟನ್ ಭೂಗತ ಆಯಕಟ್ಟಿನ ಕಚ್ಚಾ ತೈಲದ ಶೇಖರಣೆದಲ್ಲಿ ಅರ್ಧದಷ್ಟು ಪಾಲನ್ನು ಭಾರತದ್ದಾಗಲಿದೆ.
ಭಾರತವು 5.33 ಮಿಲಿಯನ್ ಟನ್ ತುರ್ತು ತೈಲ ಸಂಗ್ರಹಗಾರವನ್ನು ಕರ್ನಾಟಕದ ಪಾದೂರು ಮತ್ತು ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಿರ್ಮಿಸಿದೆ. ತುರ್ತು ಸ್ಥಿತಿಯಲ್ಲಿ ಷರತ್ತಿನಮೇಲೆ ಈ ಸಂಗ್ರಹಗಗಾರಗಳಿಂದ ತೈಲವನ್ನು ಶೇಖರಿಸಿಡಲು ವಿದೇಶಿ ತೈಲ ಕಂಪೆನಿಗಳಿಗೆ ಅವಕಾಶ ಮಾಡಿಕೊಟ್ಟಿದೆ.
ಈ ಸಮಾವೇಶದಲ್ಲಿ ಸುಮಾರು 90 ದೇಶಗಳು ಭಾಗವಹಿಸಿದ್ದವು. ಇರಾನ್ ನಿಂದ ತೈಲ ಆಮದುಗಳ ಮೇಲೆ ನಿಷೇಧ ಹಿಂತೆಗೆದುಕೊಳ್ಳಬೇಕು ಎಂದು ಅಮೆರಿಕಕ್ಕೆ ಮನವಿ ಮಾಡುತ್ತಿರುವ ಸಂದರ್ಭದಲ್ಲಿ ಈ ಸಭೆ ನಡೆದಿದೆ. ಭಾರತ, ಚೀನಾ, ಇಟಲಿ, ಗ್ರೀಸ್, ಜಪಾನ್, ದಕ್ಷಿಣ ಕೊರಿಯಾ, ಥೈವಾನ್ ಮತ್ತು ಟರ್ಕಿ ದೇಶಗಳನ್ನು ಅಮೆರಿಕಾದ ನಿರ್ಬಂಧಗಳಿಂದವಿನಾಯಿತಿ ನೀಡಲಾಗಿದೆ. ಇದು ಮಾರ್ಚ್ 2019 ರಲ್ಲಿ ಇದು ಮುಕ್ತಾಯಗೊಳ್ಳುತ್ತದೆ.
ಪೆಟ್ರೋಟೆಕ್ 2019ರಲ್ಲಿ, ಏಷ್ಯಾದಲ್ಲಿನ ಪ್ರಮುಖ ಗ್ರಾಹಕರು ಪೆಟ್ರೋಲಿಯಂ ರಫ್ತು ಮಾಡುತ್ತಿರುವ ರಾಷ್ಟ್ರಗಳ ಸಂಘಟನೆ (ಒಪೆಕ್) ಯಂತಹ ಜಾಗತಿಕ ಗುಂಪುಗಳಿಗೆ ಮೊದಲು”ಏಷ್ಯನ್ ಪ್ರೀಮಿಯಂ” ಸಮಸ್ಯೆಯನ್ನು ಎತ್ತಿ ತೋರಿಸಿದ್ದಾರೆ. ಭಾರತದ ಆರ್ಥಿಕ ಭವಿಷ್ಯವು ತೀವ್ರವಾಗಿ ಏರಿಳಿತದ ತೈಲ ಬೆಲೆಗೆ ಒಳಪಟ್ಟಿದೆ
ಸಮ್ಮೇಳನದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಮಾಜಿಕ-ಆರ್ಥಿಕ ಬೆಳವಣಿಗೆಯ ಪ್ರಮುಖ ಅಂಶವಾಗಿ ಇಂಧನದ ಪ್ರಾಮುಖ್ಯತೆಯನ್ನು ವಿವರಿಸಿದರು. “ಸೂಕ್ತ ಬೆಲೆಯಲ್ಲಿ, ಸ್ಥಿರಮತ್ತು ಸಮರ್ಥನೀಯ ತೈಲ ಸರಬರಾಜು, ಆರ್ಥಿಕತೆಯ ಕ್ಷಿಪ್ರ ಬೆಳವಣಿಗೆಗೆ ಅವಶ್ಯಕವಾಗಿದೆ. ಸಮಾಜದ ಹಿಂದುಳಿದ ಮತ್ತು ವಂಚಿತ ವರ್ಗಗಳಿಗೆ ಆರ್ಥಿಕ ಪ್ರಯೋಜನಗಳನ್ನುಪಾಲಿಸಲು ಸಹ ನೆರವಾಗುತ್ತದೆ” ಎಂದು ಮೋದಿ ತಿಳಿಸಿದರು.
ಸುಮಾರು ಶೇ.80ರಷ್ಟು ತೈಲವನ್ನು ಆಮದುಗಳ ಮೂಲಕ ಪೂರೈಸಿಕೊಳ್ಳುತ್ತಿರುವ ಭಾರತ, ಕಳೆದ ವರ್ಷ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ ಬೆಲೆ ಏರಿಕೆಯ ಆಘಾತದಿಂದ ತಪ್ಪಿಸಿಕೊಳ್ಳಲು ಭಾರತವು ತನ್ನ ಅಂತರಾಷ್ಟ್ರೀಯ ಪೂರೈಕೆಯಲ್ಲಿ ವೈವಿಧ್ಯತೆಯನ್ನು ಕಂಡುಕೊಳ್ಳಬೇಕಾಗಿದೆ.
ಅಂತರ್ ರಾಷ್ಟ್ರೀಯ ಇಂಧನ ಏಜೆನ್ಸಿಯಿಂದ ಈಚೆಗೆ ಬಂದಿರುವ ವರದಿ ಭಾರತಕ್ಕೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ವರ್ಷದ ಜಾಗತಿಕ ತೈಲ ಮಾರುಕಟ್ಟೆಯು ಒಪೆಕ್ ನಹೊರಗಿನಿಂದ ವೇಗವಾಗಿ ಬೆಳೆಯುತ್ತಿರುವ ಕಚ್ಚಾ ಪೂರೈಕೆಯನ್ನು ಅರಗಿಸಿಕೊಳ್ಳಲು ಹೋರಾಟ ನಡೆಸಲಿದೆ ಎಂದು ಐಇಎ ಮುನ್ಸೂಚನೆ ನೀಡಿದೆ.
ಲೇಖನ : ಸುನೀಲ್ ಗಟಾಡೆ, ರಾಜಕೀಯ ವಿಶ್ಲೇಷಕರು