ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜೆಟ್ ಏರ್ವೇಸ್ ವಿಮಾನ ಕಂಪನಿ ತಾತ್ಕಾಲಿಕವಾಗಿ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿರುವ ನಂತರ ಪ್ರಯಾಣಿಕರಿಗೆ ಆಗಿರುವ ಅನಾನುಕೂಲ ಮತ್ತು ವಿಮಾನ ಕಂಪನಿಯ ಸಾಮರ್ಥ್ಯ ಮೊದಲಾದ ತುರ್ತು ವಿಷಯಗಳ ಸಮಾಲೋಚನೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಇಂದು ವಿಮಾನ ನಿಲ್ದಾಣಗಳು ಮತ್ತು ಜೆಟ್ ಕಂಪನಿಯ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ. ಸಚಿವಾಲಯ ಈ ಕುರಿತು ಸರಣಿ ಟ್ವೀಟ್ ಸಂದೇಶಗಳ ಮೂಲಕ ಮಾಹಿತಿ ನೀಡಿದ್ದು, ಬ್ಯಾಂಕ್ಗಳ ನೇತೃತ್ವದಲ್ಲಿ ಮುಂದಿನ ತಿಂಗಳ ೧೦ನೇ ತಾರೀಖಿನೊಳಗೆ ಬಿಕ್ಕಟ್ಟು ಬಗೆಹರಿಸುವ ಪ್ರಕ್ರಿಯೆಗಳು ಮುಂದುವರೆಯುತ್ತವೆ ಎಂದು ತಿಳಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಮಹಾನಿರ್ದೇಶಕರು ಹಾಗೂ ಇತರ ವಿಮಾನ ಸೇವೆಗಳ ನಿಯಂತ್ರಕರು ಪರಿಸ್ಥಿತಿಯ ಬಗ್ಗೆ ನಿಕಟ ನಿಗಾ ಇರಿಸಿದ್ದು, ಪ್ರಯಾಣಿಕರ ಟಿಕೆಟ್ ರದ್ದತಿ ಮತ್ತು ಪರ್ಯಾಯ ಟಿಕೆಟ್ ಕಾಯ್ದಿರಿಸುವಿಕೆ, ಹಣ ಮರುಪಾವತಿ ಹಾಗೂ ಇನ್ನಿತರ ಪ್ರಕ್ರಿಯೆಗಳನ್ನು ಗಮನಿಸುತ್ತಿದ್ದಾರೆ ಎಂದೂ ಸಹ ಸಂದೇಶದಲ್ಲಿ ವಿವರಿಸಲಾಗಿದೆ.