ಭಾರತ ಮತ್ತು ಟರ್ಕಿ ಇತ್ತೀಚೆಗೆ ಹಿರಿಯ ಅಧಿಕಾರಿಗಳ ಎರಡು ಸರಣಿ ಸಭೆಗಳನ್ನು ಮಾಡುವ ಮೂಲಕ ತಮ್ಮ ಪಾಲುದಾರಿಕೆಯನ್ನು ನವೀಕರಿಸಲುಇತ್ತೀಚೆಗೆ ಸ್ಥಿರ ಆದರೆ ನಿರ್ಣಾಯಕ ಪ್ರಯತ್ನ ಮಾಡಿದ್ದು ಸಂಬಂಧದಲ್ಲಿ ಪ್ರಗತಿಯನ್ನು ಕಂಡಿದೆ. ಟರ್ಕಿಯು ಉದಯಿಸುತ್ತಿರುವ ಮಿತ್ರ ಭಾರತಮತ್ತು ಸಾಂಪ್ರದಾಯಿಕ ಮಿತ್ರ ಪಾಕಿಸ್ತಾನದ ನಡುವಿನ ಸಂಬಂಧವನ್ನು ಮರು ವ್ಯಾಖ್ಯಾನಿಸುವ ಉದ್ದೇಶ ಹೊಂದಿದೆ. ಅಂಕಾರಾ ತನ್ನ ಅಧ್ಯಕ್ಷೀಯಸಲಹೆಗಾರ ಡಾ. ಇಬ್ರಾಹಿಂ ಕಲಿನ್ ಅವರನ್ನು ಹೊಸದಿಲ್ಲಿಗೆ ಕಳುಹಿಸಿದೆ. ಅವರು ವ್ಯಾಪಕವಾದ ಭಯೋತ್ಪಾದನೆ-ವಿರೋಧಿ-ಸಹಕಾರದ ಜೊತೆಗೆ ಆರ್ಥಿಕತೆಯ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆಯ ಹಾನಿಯನ್ನು ಅದರ ದೀರ್ಘಕಾಲೀನ ಬಲಿಪಶುವಾಗಿರುವ ಭಾರತವು ಸರಿ ಪಡಿಸಲು ಟರ್ಕಿಯ ಸಹಾಯವನ್ನು ಬಯಸಿದೆ. ಇಬ್ರಾಹಿಂ ಕಾಲಿನ್ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊವಲ್ ಅವರನ್ನು ಭೇಟಿ ಮಾಡಿ ಶ್ರೀಲಂಕಾದ ಇತ್ತೀಚಿನಭಯೋತ್ಪಾದಕ ದಾಳಿಗಳ ಬಗ್ಗೆ ಮಾತುಕತೆ ನಡೆಸಿದರು.
ದಕ್ಷಿಣ ಏಷ್ಯಾ ಮತ್ತು ಪಶ್ಚಿಮ ಏಷ್ಯಾಕ್ಕೆ ಸಂಬಂಧಿಸಿದಂತೆ, ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಎರಡು ಬದಿಗಳು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿವೆ.ಭಯೋತ್ಪಾದನೆಯನ್ನು ಎಲ್ಲಾ ಸ್ವರೂಪಗಳಲ್ಲಿ ಮತ್ತು ಅಭಿವ್ಯಕ್ತಿಗಳಲ್ಲಿ ತೊಡೆದುಹಾಕಲು ಮತ್ತು ಭಯೋತ್ಪಾದಕ ದಾಳಿಯ ಪ್ರಾಯೋಜಕರು ಮತ್ತು ಭಯೋತ್ಪಾದಕರನ್ನು ಕಾನೂನಿನ ಕಟಕಟೆಗೆ ತರಲು ಎಲ್ಲ ದೇಶಗಳ ಸಹಕಾರದ ಬಗ್ಗೆ ಉಭಯ ದೇಶಗಳು ಮಾತುಕತೆಯ ಸಂದರ್ಭದಲ್ಲಿ ಒತ್ತು ನೀಡಿವೆ. ಎರಡು ದೇಶಗಳ ಅಧಿಕಾರಿಗಳು ಸಾಂಸ್ಕೃತಿಕಮತ್ತು ಸಾಂಸ್ಕೃತಿಕ ಸಂಬಂಧಗಳ ಮಹತ್ವದ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.
ಡಾ. ಕಾಲಿನ್ ಅವರ ಭೇಟಿಯ ಪ್ರಮುಖ ಅಂಶವೆಂದರೆ ಹಿರಿಯ ಇಸ್ಲಾಮಿಕ್ ವಿದ್ವಾಂಸರು ಮತ್ತು ಬುದ್ಧಿಜೀವಿಗಳೊಂದಿಗೆ ಅವರು ನಡೆಸಿದ ಮಾತುಕತೆ. ನವ ದೆಹಲಿಮತ್ತು ಅಂಕಾರಾ ಮೂಲಭೂತವಾದವನ್ನು ತೊಡೆದುಹಾಕಲು ಪರಸ್ಪರ ಸಹಕಾರದ ಬಗ್ಗೆ ಮನಗಂಡಿವೆ. ಈ ಸಭೆಯು ಭಾರತೀಯ ಸಾಂಸ್ಕೃತಿಕ ಮತ್ತು ಬಹುಸಾಂಸ್ಕೃತಿಕ ಆಯಾಮ ಮತ್ತು ಇಸ್ಲಾಮಿಕ್ ಸಂಪ್ರದಾಯದ ಬಗ್ಗೆ ಉತ್ತಮವಾದ ಗ್ರಹಿಕೆಯನ್ನು ಹೊಂದುವ ಆಶಯ ಇಟ್ಟುಕೊಂಡಿತ್ತು.
ಡಾ. ಕಾಲಿನ್ ಅವರ ಭೇಟಿಯಾದ ದಿನಗಳ ನಂತರ, ಟರ್ಕಿಯ ಉಪ ವಿದೇಶಾಂಗ ಸಚಿವ ಸೆದಾತ್ ಒನಾಲ್ ಭಾರತಕ್ಕೆ ಮೂರು ದಿನ ಭೇಟಿ ನೀಡಿದ್ದರು. ಅವರು ಬಾಹ್ಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಗಿದೇಶ್ ಎ ಶರ್ಮಾ ಅವರನ್ನು ಭೇಟಿಯಾದರು ಮತ್ತು ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಹೆಚ್ಚಿಸಲು ಅವಕಾಶಗಳನ್ನು ಪರಿಶೀಲಿಸುವಂತಹ ದ್ವಿಪಕ್ಷೀಯ ಸಂಬಂಧಗಳ ವಿವಿಧ ಅಂಶಗಳನ್ನು ಚರ್ಚಿಸಿದರು. ಎರಡೂ ಬದಿಗಳು ಪ್ರಸ್ತುತ ಪ್ರದೇಶವನ್ನು ತಮ್ಮ ಆಯಾ ಪ್ರದೇಶಗಳಲ್ಲಿ ಪರಿಶೀಲಿಸಿದವು ಮತ್ತು ಹಲವಾರು ಬಹುಪಕ್ಷೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡವು.ಅಂಕಾರಾವು ಇಸ್ಲಾಮಾಬಾದ್ ನ ಸಾಂಪ್ರದಾಯಿಕ ಮಿತ್ರನಾಗಿದ್ದು ಟರ್ಕಿಯ ಬೆಂಬಲ ಅತ್ಯಂತ ಮಹತ್ವದ್ದಾಗಿದೆ. ಆದಾಗ್ಯೂ, ಟರ್ಕಿಯ ಅಧ್ಯಕ್ಷ ರೆಸೆಪ್ ಟೆಯಿಪ್ ಎರ್ಡೊಗನ್ ಅವರು ದಕ್ಷಿಣ ಏಷ್ಯಾದ ಮೇಲೆ ಸ್ಥಿರ ಮತ್ತು ವ್ಯಾಪಕ ಟರ್ಕಿಷ್ ಪ್ರಭಾವವನ್ನು ಬಯಸುತ್ತಿದ್ದಾರೆ. 2016ರಲ್ಲಿ ಭಾರತದ ಪ್ರಧಾನ ಮಂತ್ರಿಯೊಂದಿಗೆ ವೈಯಕ್ತಿಕ ಸಂಬಂಧವನ್ನು ಅಭಿವೃದ್ಧಿಪಡಿಸಲು ಯತ್ನಿಸಿ ಎರ್ಡೋಗಾನ್ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಕೆಲವು ವರ್ಷಗಳ ಹಿಂದೆಯೇ ಅವರನ್ನು ಪದಚ್ಯುತಗೊಳಿಸಲು ದಂಗೆ ನಡೆದ ಸ್ವಲ್ಪ ಹೊತ್ತಿನಲ್ಲೇ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತವು ಅವರ ಸರ್ಕಾರವನ್ನು ಸಂಪರ್ಕಿಸಿದ್ದು ಎರ್ಡೋಗನ್ ಅವರನ್ನು ವಿಶೇಷವಾಗಿ ಪ್ರಭಾವಿಸಿತ್ತು. ಪಾಕಿಸ್ತಾನವು ಅಂತರ್ ಗಡಿ ಭಯೋತ್ಪಾದನೆಯನ್ನು ರಾಜ್ಯ ನೀತಿಯ ಉಪಕರಣವಾಗಿ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತವು ಪಶ್ಚಿಮ ಏಷ್ಯಾದ ಮೂರು ವಿಭಿನ್ನ ಹಿನ್ನಲೆಯ ದೇಶಗಳಾದ ಸೌದಿ ಅರೇಬಿಯಾ, ಇರಾನ್ ಮತ್ತು ಟರ್ಕಿಗಳ ಜೊತೆಗೆ ಸಕ್ರಿಯ ಸಂಬಂಧವನ್ನು ಹೊಂದಿದೆ. ಪ್ರವಾಸೋದ್ಯಮ, ಸ್ಮಾರ್ಟ್ ನಗರಗಳು, ನಿರ್ಮಾಣ, ಮೂಲಭೂತ ಸೌಕರ್ಯ ಮತ್ತು ಐಟಿಗಳಂತಹ ನಿರ್ದಿಷ್ಟ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಅವಕಾಶಗಳ ಬಗ್ಗೆ ಎರಡೂ ದೇಶಗಳು ವಿಚಾರ ವಿನಿಮಯ ಮಾಡಿಕೊಂಡವು. 2017 ರಲ್ಲಿ ಟರ್ಕಿಯ ಅಧ್ಯಕ್ಷರು ಭಾರತಕ್ಕೆ ಆಗಮಿಸಿದಾಗಿನಿಂದ ದ್ವಿಪಕ್ಷೀಯ ವ್ಯಾಪಾರ ಸ್ಥಿರವಾಗಿ ಬೆಳೆದಿದೆ ಮತ್ತು ಪ್ರಸ್ತುತ 8.6 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ವ್ಯಾಪಾರ ವಹಿವಾಟು ಇದೆ. 2020 ರ ವೇಳೆಗೆ 10 ಬಿಲಿಯನ್ ಅಮೆರಿಕನ್ ಡಾಲರ್ ಮುಟ್ಟುವ ಗುರಿ ಹೊಂದಲಾಗಿದೆ. ಟರ್ಕಿಶ್ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್ಎಂಸಿಜಿ) ಉತ್ಪನ್ನಗಳು ಭಾರತೀಯ ಮಾರುಕಟ್ಟೆಯಲ್ಲಿ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿವೆ. ಭಾರತ-ಟರ್ಕಿ ವ್ಯಾಪಾರವು ಕಳೆದ ದಶಕದಲ್ಲಿ ಅರ್ಧದಷ್ಟು ಹೆಚ್ಚಾಗಿದೆ. ಟರ್ಕಿಗೆ ಭಾರತದ ಪ್ರಮುಖ ರಫ್ತುಗಳಲ್ಲಿ ಸಾಧಾರಣ ತೈಲಗಳು ಮತ್ತು ಇಂಧನಗಳು, ಮಾನವ ನಿರ್ಮಿತ ಫಿಲಾಮೆಂಟ್ಸ್ ಮತ್ತು ಪ್ರಧಾನ ಫೈಬರ್ಗಳು, ಆಟೊಮೋಟಿವ್ ಬಿಡಿಭಾಗಗಳು, ಸಾವಯವ ರಾಸಾಯನಿಕಗಳು ಇತ್ಯಾದಿ ಸೇರಿವೆ. ಭಾರತಕ್ಕೆ ಟರ್ಕಿಯ ರಫ್ತುಗಳಲ್ಲಿ ಗಸಗಸೆ; ಯಂತ್ರಗಳು ಮತ್ತು ಯಂತ್ರೋಪಕರಣಗಳು, ಕಬ್ಬಿಣ ಮತ್ತು ಉಕ್ಕಿನ ಉಪಕರಣಗಳು, ಅಜೈವಿಕ ರಾಸಾಯನಿಕಗಳು, ಮುತ್ತುಗಳು ಮತ್ತು ಅಮೂಲ್ಯವಾದ ಅರೆ-ಪ್ರಶಸ್ತ ಕಲ್ಲುಗಳು ಮತ್ತು ಲೋಹಗಳು, ಮಾರ್ಬಲ್ ಇತ್ಯಾದಿ ಸೇರಿದೆ.
ಭಾರತ ಮತ್ತು ಟರ್ಕಿ ನಡುವೆ ಐತಿಹಾಸಿಕ ಸಂಪರ್ಕಗಳಿವೆ. ಒಟ್ಟೊಮನ್ ಸುಲ್ತಾನರು ಮತ್ತು ಉಪಖಂಡದ ರಾಜರುಗಳ ನಡುವಿನ ರಾಜತಾಂತ್ರಿಕಕಾರ್ಯಾಚರಣೆಗಳ ಮೊದಲ ವಿನಿಮಯವು 1481-82ರಷ್ಟು ಹಿಂದಿನದು. ಮೌಲಾನಾ ಜಲಾಲುದ್ದೀನ್ ರೂಮಿಯ ಸೂಫಿ ತತ್ತ್ವವು ಭಾರತೀಯ ಉಪ-ಖಂಡದಲ್ಲಿಸೂಫಿ ಮತ್ತು ಅದರ ಭಕ್ತಿ ಚಳವಳಿಯ ಅದರ ಸ್ವಂತ ಸಂಪ್ರದಾಯಗಳೊಂದಿಗೆ ಪ್ರತಿಧ್ವನಿಯನ್ನು ಕಂಡುಕೊಂಡಿದೆ. ಭಾರತ ಮತ್ತು ಟರ್ಕಿ ನಡುವಿನ ತೀರಾಇತ್ತೀಚಿನ ಐತಿಹಾಸಿಕ ಸಂಪರ್ಕಗಳು 1912 ರಲ್ಲಿ ಬಾಲನ್ ವಾರ್ಸ್ ಮತ್ತು
ಬರಹ: ದೀಪಂಜನ್ ರಾಯ್ ಚೌಧುರಿ, ರಾಜತಾಂತ್ರಿಕ ವರದಿಗಾರ