ಕಾಶ್ಮೀರ ವಿಷಯದ ಬಗ್ಗೆ UN ಭದ್ರತಾ ಮಂಡಳಿಯಲ್ಲಿ “ಅನೌಪಚಾರಿಕ ಸಮಾಲೋಚನೆ” ಗೆ ಕರೆ ನೀಡಿದ್ದ ಚೀನಾಗೆ ಮತೊಮ್ಮೆ ಮುಖಭಂಗವಾಗಿದೆ. ಈ ನಡೆಗೆ ಪಾಕಿಸ್ತಾನವೂ ಬೆಂಬಲ ನೀಡಿತ್ತು. ಏನೇ ಆದರೂ, ಭದ್ರತಾ ಮಂಡಳಿಯ ಬಹುಪಾಲು ಸದಸ್ಯರು ಈ ಬೆಂಬಲದ ನಡೆಯನ್ನು ತಳ್ಳಿ ಹಾಕಿದರು. ಭಾರತೀಯ ಸಂವಿಧಾನದ 370ನೇ ಪರಿಚ್ಛೇದವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚೀನಾ ನಡೆಸಿದ ಮೂರನೇ ಪ್ರಯತ್ನವು ಇದಾಗಿದೆ. ಇಂತಹ ಪ್ರಯತ್ನಗಳಿಂದ ಸರಿಯಾದ ಪಾಠಗಳನ್ನು ಬೀಜಿಂಗ್ ಕಲಿಯಬೇಕಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯವು ಹೇಳಿತು. ಇದು ದ್ವಿಪಕ್ಷೀಯ ಸಮಸ್ಯೆ ಎಂದು UNSCಯ ಹೆಚ್ಚಿನ ಸದಸ್ಯರು ಭಾವಿಸುತ್ತಾರೆ.
UNನ ಭಾರತದ ಶಾಶ್ವತ ಪ್ರತಿನಿಧಿಯಾದ ಸೈಯದ್ ಅಕ್ಬರುದ್ದೀನ್ ಅವರು “ದೇಶವನ್ನು ಕಾಡುತ್ತಿರುವ ಅನಾರೋಗ್ಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಪಾಕಿಸ್ತಾನದ ಸುಳ್ಳು ಸೋಗಿನ ಅಭ್ಯಾಸವು ಹಾದಿಯ ಕೊನೆ ತಲುಪಿದೆ” ಎಂದು ಹೇಳಿದ್ದಾರೆ. ರಾಜತಾಂತ್ತ್ರಿಕತೆಯು, ಸಣ್ಣದಾದರೂ, ಕ್ಲಿಷ್ಟವಾದ ಹಾಗೂ ನೈಜವಾದ ಹೆಜ್ಜೆಗಳಾಗಿರಬೇಕು. ಇಂತಹ ಸಣ್ಣ ಹೆಜ್ಜೆಯ್ಯನ್ನು ಆಗಸ್ಟ್ 5ರಂದು ಇಟ್ಟಿದ್ದೇವೆ ಎಂದು ಶ್ರೀ ಅಕ್ಬರುದ್ದೀನ್ ಹೇಳಿದ್ದಾರೆ. ವಾಸ್ತವವಾಗಿ, ಭದ್ರತಾ ಮಂಡಳಿಯ ಪ್ರಮುಖ ಶಾಶ್ವತ ಸದಸ್ಯರುಗಳಾದ US , UK, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ಭಾರತದ ಈ ನಡೆಯನ್ನು ಬೆಂಬಲಿಸಿವೆ. ನಾಲ್ಕು ಶಾಶ್ವತ ಸದಸ್ಯರು ಈ ವಿಷಯವನ್ನು ಭಾರತದ ಆಂತರಿಕ ಸಮಸ್ಯೆಯೆಂದು ವಿವರಿಸಿದ್ದಾರೆ.
ರಾಜತಾಂತ್ರಿಕತೆಗೆ ಸ್ಪಷ್ಟ ಪಾರದರ್ಶಕ ಮಾರ್ಗದ ಅವಶ್ಯಕತೆಯಿದೆ. ಪಾಕಿಸ್ತಾನವು ಐದು ತಿಂಗಳ ಹಿಂದೆಯೇ ಇದಕ್ಕೆ ಅಡ್ಡಿಪಡಿಸಿದೆಯೆಂದು ಅಕ್ಬರುದ್ದೀನ್ ಹೇಳಿದ್ದಾರೆ. ಬಹುಶಃ, ಈ ನಿಟ್ಟಿನಲ್ಲಿ ಇಸ್ಲಾಮಾಬಾದ್ ತನ್ನ ಮೊದಲ ಹೆಜ್ಜೆಯಿಟ್ಟು ರಾಜತಾಂತ್ರಿಕತೆಯತ್ತ ಗಂಭೀರ ಆಸಕ್ತಿಯನ್ನು ತೋರಿಸ ಬೇಕಾಗಿದೆಯೆಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಸರ್ವಋತು ಸ್ನೇಹಿತನಾದ ಚೀನಾವೂ, ಕಾಶ್ಮೀರ ಸಮಸ್ಯೆಯನ್ನು ಭದ್ರತಾ ಮಂಡಳಿ ಸಮಾಲೋಚನಾ ಕೊಠಡಿಯಲ್ಲಿ ಮುಚ್ಚಿದ ಸಮಾಲೋಚನೆಯ ಸಂದರ್ಭದಲ್ಲಿ “ಇತರ ವಿಷಯಗಳ” ಅಡಿಯಲ್ಲಿ ಮತೊಮ್ಮೆ ಎತ್ತಿಹಿಡಿಯಲು ಪ್ರಯತ್ನಿಸಿತು. ಕಾಶ್ಮೀರ ಸಮಸ್ಯೆ ಚರ್ಚೆಯನ್ನು ಮುನ್ನಡೆಸಲು ಐದು ಶಾಶ್ವತ ಸದಸ್ಯರಲ್ಲಿ ಒಬ್ಬ ಸದಸ್ಯ ಮಾತ್ರ ತನ್ನ ಉಪಸ್ಥಿತಿಯನ್ನು ಬಳಸಿದೆ. ಇತರ ಎಲ್ಲ ಶಾಶ್ವತ ಸದಸ್ಯರು ಬೇರೆಯೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಜಾಗತಿಕ ಒಮ್ಮತವು ಅದನ್ನು ಕೇಳಲು ಬಯಸುವವರಿಗೆ ಈಗ ಸ್ಪಷ್ಟವಾಗಿದೆ” ಎಂದು UNನ ಭಾರತದ ಶಾಶ್ವತ ಪ್ರತಿನಿಧಿ ಹೇಳಿದ್ದಾರೆ.
ಮಧ್ಯಸ್ಥಿಕೆಗಳ ಮೂಲಕ ಕಾಶ್ಮೀರವನ್ನು ಅಂತರರಾಷ್ಟ್ರೀಕರಿಸಲು ಮೂರು ಪ್ರಯತ್ನಗಳನ್ನು ಚೀನಾ ಮಾಡಿದೆ. ಭದ್ರತಾ ಮಂಡಳಿಯ ಹೊಸ ಸದಸ್ಯರೊಂದಿಗೆ ಬೀಜಿಂಗ್ ತನ್ನ ಅದೃಷ್ಟವನ್ನು ಪ್ರಯತ್ನಿಸಿದ ಪ್ರಕರಣವಾಗಿರಬಹುದು ಎಂದು UNನ ಉನ್ನತ ಭಾರತೀಯ ರಾಜತಾಂತ್ರಿಕರು ಹೇಳಿದ್ದಾರೆ. 15 ಸದಸ್ಯರ ಸಂಸ್ಥೆಯಾದ ಭದ್ರತಾ ಮಂಡಳಿಯ ಸಂಯೋಜನೆಯು ಪ್ರತಿವರ್ಷವು ಬದಲಾಗುತ್ತದೆ. ಕಳೆದ ವರ್ಷದ ಐದು ಸದಸ್ಯರ ಸ್ಥಾನದಲ್ಲಿ, ಈ ವರ್ಷ ಐದು ಹೊಸ ಸದಸ್ಯರ ಸೇರ್ಪಡೆಯಾಗಿದೆ. ಬದಲಾದ ಸಂಯೋಜನೆಯಿಂದಾಗಿ ಬಹುಶಃ ತಮ್ಮ ದೃಷ್ಟಿಕೋನದಲ್ಲಿ ಹೊಸ UNSC ಸದಸ್ಯರು ಭಿನ್ನವಾಗಿರಬಹುದು ಎಂದು ಬೀಜಿಂಗ್ ಭಾವಿಸಿದೆ. ಆದರೆ, ಚೀನಾ-ಪಾಕಿಸ್ತಾನದ ಈ ನಡೆಯನ್ನು ಒಪ್ಪಿಕೊಳ್ಳುವವರು ಯಾರು ಇಲ್ಲ.
ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಪರಿಹರಿಸಬೇಕಾದ ಸಮಸ್ಯೆಯೆಂದು ಇಡೀ ಜಗತ್ತು ಪರಿಗಣಿಸುತ್ತದೆಂದು ಇತ್ತೀಚಿನ ಮುಚ್ಚಿದ ಬಾಗಿಲಿನ ಅನೌಪಚಾರಿಕ ಸಮಾಲೋಚನೆಗಳ ಫಲಿತಾಂಶವು ತೋರಿಸುತ್ತದೆ. ಶ್ರೀ ಅಕ್ಬರುದ್ದೀನ್, “UNನಲ್ಲಿ ಉಳಿದೆಲ್ಲರಿಗೂ ಏನು ಸ್ಪಷ್ಟವಾಗಿ ಗೋಚರಿಸಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಈಗ ಬೀಜಿಂಗ್ ಮತ್ತು ಇಸ್ಲಾಮಾಬಾದ್ಗೆ ಬಿಟ್ಟದ್ದು” ಎಂದು ತಿಳಿಸಿದ್ದಾರೆ. ಭಯೋತ್ಪಾದನೆಯನ್ನು ಪಾಕಿಸ್ತಾನ ರಾಜ್ಯ ನೀತಿಯಾಗಿ ಬಳಸುತ್ತಿದೆ ಎಂದು ಭಾರತೀಯ ರಾಜತಾಂತ್ರಿಕರು ಟೀಕಿಸಿದ್ದಾರೆ. “ಯಾವುದೇ ಸಾಮಾನ್ಯ ದೇಶವು ಅದನ್ನು ಮಾಡುವುದಿಲ್ಲ. ನಾವು ಸಾಮಾನ್ಯ ರೀತಿಯಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿರುತ್ತೇವೆ” ಎಂದು ಅಕ್ಬರುದ್ದೀನ್ ಹೇಳಿದ್ದಾರೆ .
370ನೇ ವಿಧಿಯನ್ನು ಹಿಂತೆಗೆದುಕೊಂಡಾಗಿನಿಂದ, ಪ್ರತಿಯೊಂದು ಅವಕಾಶದಲ್ಲೂ ಈ ವಿಷಯವನ್ನು ಕದಡಲು ಪಾಕಿಸ್ತಾನವು ಪ್ರಯತ್ನಿಸುತ್ತಿದೆ. ಇಸ್ಲಾಮಾಬಾದ್ನ ಈ ಕಾರ್ಯತಂತ್ರವು ಯಾವುದೇ ಲಾಭಾಂಶವನ್ನು ನೀಡಿಲ್ಲ. ತಮ್ಮ ಸರ್ಕಾರದ ಕೆಟ್ಟ ಆಡಳಿತದಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಸಲುವಾಗಿ, ಭಾರತದ ಆಂತರಿಕ ನಡೆಗಳನ್ನು ಎತ್ತಿ ತೋರಿಸುವಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮುಂಚೂಣಿಯಲ್ಲಿದ್ದಾರೆ. ಇದು ನಿಜಕ್ಕೂ ಕಪಟವೆಂದೇ ಹೇಳಬಹುದು.
ಅಗಾಧವಾದ ಆರ್ಥಿಕ ಸಮಸ್ಯೆಗಳನ್ನು ಮತ್ತು ದೇಶೀಯ ಅಶಾಂತಿಯನ್ನು ಪಾಕಿಸ್ತಾನವು ಎದುರಿಸುತ್ತಿದೆ. ಆ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಪಾಕಿಸ್ತಾನದ ಪ್ರತಿಯೊಬ್ಬ ರಾಜಕಾರಣಿಯು ಬಳಸುವ ಕೊನೆಯ ಅಸ್ತ್ರವನ್ನು ಪ್ರಧಾನಿ ಇಮ್ರಾನ್ ಖಾನ್ ಅವರೂ ಆಶ್ರಯಿಸಿದ್ದಾರೆ. ಅದೇನೆಂದರೆ ‘ಭಾರತ ವಿರೋಧಿ ವಾಕ್ಚಾತುರ್ಯ’. ಜನರ ಕುಂದುಕೊರತೆಗಳನ್ನು ಪರಿಹರಿಸಲು ಅಂತಹ ಜಾದು ಎಂದಿಗೂ ಬದಲಿ ಉತ್ತರವಲ್ಲ ಎಂದು ಕ್ರಿಕೆಟಿಗನಾಗಿದ್ದ ಈ ರಾಜಕಾರಣಿಯವರು ತಿಳಿದಿರಬೇಕು. ದಕ್ಷಿಣ ಏಷ್ಯಾದ ಎಲ್ಲಾ ದೇಶಗಳಲ್ಲಿ ಪಾಕಿಸ್ತಾನ ಅತಿ ಕಡಿಮೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು (HDI) ಹೊಂದಿರುವ ದೇಶ. ಆ ದೇಶದಲ್ಲಿ ಅರವತ್ತೈದು ದಶಲಕ್ಷ ಜನರು “ತೀವ್ರವಾಗಿ ಬಡವರು”. ಬಹುಪಾಲು ಪಾಕಿಸ್ತಾನಿ ಮಹಿಳೆಯರು ಬಡತನದಿಂದ ಬಳಲುತ್ತಿದ್ದು, ಜೀವನದುದ್ದಕ್ಕೂ ಅವಕಾಶಗಳ ಕೊರತೆಯಿಂದ ನರಳುತ್ತಿದ್ದಾರೆ.
ಇಮ್ರಾನ್ ಖಾನ್ ಅವರು ಭಾರತದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ, ಪಾಕಿಸ್ತಾನದ ಜನರಿಗೆ ಭರವಸೆ ನೀಡಿದ್ದ “ರಿಯಾದ್-ಎ-ಮದೀನಾ” (ಕಲ್ಯಾಣ ರಾಜ್ಯ) ವನ್ನು ನಿರ್ಮಿಸುವ ಅವರ ಆಲೋಚನೆಗೆ ದೃಡವಾದ ರೂಪುರೇಷೆ ನೀಡಬೇಕು.
ಲೇಖನ: ಕೌಶಿಕ್ ರಾಯ್, ಆಕಾಶವಾಣಿ ಸುದ್ಧಿ ವಿಶ್ಲೇಷಕ