2020-21ರ ಕೇಂದ್ರ ಬಜೆಟ್ ಬಹುಮುಖಿ ದೂರದೃಷ್ಟಿ ಕ್ರಮಗಳನ್ನು ಅನಾವರಣಗೊಳಿಸುವ ಮೂಲಕ ಮಂದಗತಿಯಲ್ಲಿರುವ ಭಾರತದ ಆರ್ಥಿಕತೆಯನ್ನು ಹಿಮ್ಮೆಟ್ಟಿಸಲು ನಿರ್ಣಾಯಕವಾದ ಪುಷ್ಠಿ ನೀಡಿದೆ. ಈ ಕ್ರಮಗಳಿಂದಾಗಿ ಜನರ ಜೇಬಿಗೆ ಹೆಚ್ಚಿನ ಹಣ ಬರುವಂತಾಗುತ್ತದೆಯಲ್ಲದೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೃಷಿ ವಲಯಕ್ಕೆ ಸಹಾಯ ಮಾಡಿದಂತಾಗಿದೆ ಹಾಗೂ ವ್ಯಾಪಾರ ವ್ಯವಹಾರ ಹೆಚ್ಚಿಸಲು ಕಂಪನಿಗಳ ಮೇಲಿನ ಲಾಭಾಂಶದ ತೆರಿಗೆಯನ್ನು ತೆಗೆದುಹಾಕಲಾಗಿದೆ.
ಆರ್ಥಿಕ ಮುಗ್ಗಟ್ಟು ಇರುವ ಸಂದರ್ಭದಲ್ಲಿ ಬಜೆಟ್ ರೂಪಿಸುವುದು ಪ್ರಯಾಸದಾಯಕ ಕೆಲಸ. ಆದರೆ ಹಣಕಾಸು ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಸರಕಾರಿ ಸಾಲಗಳ ಬಹುಪಾಲು ಭಾಗವು ಬಂಡವಾಳ ವೆಚ್ಚದ ಕಡೆಗೆ ಹೋಗುವುದನ್ನು ಸರಿಪಡಿಸುವ ಮೂಲಕ ಬಂಡವಾಳ ವೆಚ್ಚಕ್ಕಾಗಿ ಸಾಕಷ್ಟು ವಿನಿಯೋಗಗಳನ್ನು ಹೊಂದಿಸಿ ದಕ್ಷ ಸಮತೋಲನವನ್ನು ಕಾಯ್ದುಕೊಂಡಿದ್ದಾರೆ. ಬಜೆಟ್ ನಿರರ್ಗಳವಾಗಿ ವಿವರಿಸಿರುವ ಪ್ರಕಾರ ಸರ್ಕಾರವು ಪ್ರತಿಯೊಬ್ಬ ನಾಗರಿಕರ ಜೀವನ ನಿರ್ವಹಣೆಯೂ ಸಮೃದ್ಧಿ, ಯೋಗಕ್ಷೇಮ ಮತ್ತು ಸುಲಭವಾಗುವಂತಹ ಒಟ್ಟಾರೆ ಗುರಿಯ ಭಾಗವಾಗಿ ನೈರ್ಮಲ್ಯ ಮತ್ತು ನೀರಿನ ಸಂರಕ್ಷಣೆಯಲ್ಲಿ ಬಂಡವಾಳ ಸ್ವತ್ತುಗಳ ರಚನೆಗಳಿಗೆ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ತನ್ನ ಮುಂದುವರೆದ ಪುಷ್ಟಿ ನೀಡಿದೆ.
ಐದು ವರ್ಷಗಳ 102 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ಯೋಜನೆಗೆ ಮೂಲಸೌಕರ್ಯಗಳ ಹಣಕಾಸು ಕಂಪನಿಗಳಿಂದ ಬಂಡವಾಳ ಹೊಂದಿಸಲು ಈ ಹಣಕಾಸು ವರ್ಷದಲ್ಲಿ 22,000 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇದರಿಂದ ಬಂಡವಾಳ ಹೂಡಿಕೆ ಹಲವು ಪಟ್ಟು ಹೆಚ್ಚಾಗಲು ಸಹಾಯವಾಗುತ್ತದೆ ಮತ್ತು ಯೋಜನಾ ವ್ಯಾಪ್ತಿಯಾದ್ಯಂತ ಮೂಲಸೌಕರ್ಯ ಯೋಜನೆಗಳಿಗೆ ಅಗತ್ಯವಿರುವ ದೀರ್ಘಕಾಲೀನ ಹಣಕಾಸು ವಿಸ್ತರಿಸಲು ಸಹಾಯವಾಗುತ್ತದೆ.
ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (ಎಫ್ಆರ್ಬಿಎಂ) ಕಾಯ್ದೆ ರೂಪಿಸುವ ಮೂಲಕ ಆರ್ಥಿಕತೆಯ ನೈಜ ಕ್ಷೇತ್ರಗಳಿಗೆ ಅಗತ್ಯವಾದ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ 2019-20ರಲ್ಲಿ ಕೊರತೆಯಾಗಿರುವ ಶೇಕಡಾ 3.3 ಜಿಡಿಪಿ ಗುರಿಯನ್ನು ಶೇಕಡಾ 3.8 ಕ್ಕೆ ಏರಿಸುತ್ತದೆ. ಭಾರತದಂತಹ ವಿಶಿಷ್ಟವಾದ ಆರ್ಥಿಕತೆಯು ತನ್ನ ಬೆಳವಣಿಗೆಯ ಓಗವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಈ ಶೇಕಡಾ 0.5 ಜಿಡಿಪಿಯ ಸಮರ್ಥನೆ ಇದೆ. ಹಣಕಾಸಿನ ನಿರ್ವಹಣೆಯಲ್ಲಿ ಅಂತರ-ಪೀಳಿಗೆಯ ಇಕ್ವಿಟಿಯನ್ನು ಖಚಿತಪಡಿಸಿಕೊಳ್ಳಲು ಬಜೆಟ್ ಕೊರತೆಯ ಸಂಖ್ಯೆಯನ್ನು ಸುಸ್ಥಿರವಾಗಿರಿಸಿದೆ.
ಆರ್ಥಿಕ ಪಾಲುದಾರರ ವಿಶಾಲ ವರ್ಗಗಳ ಪೈಕಿ ಕೃಷಿ, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಹೊಸ ಪ್ರಸ್ತಾಪಗಳು ಬಂದಿವೆ. ಅಲ್ಲದೆ ಸಮರ್ಥವಾದ ಗೋದಾಮುಗಳ ರಚನೆ, ತಡೆರಹಿತವಾದ ರಾಷ್ಟ್ರೀಯ ಶೀತ ಪೂರೈಕೆ ಸರಪಳಿ ರಚನೆ ಹಾಗೂ ಮುಂದಿನ ಹಣಕಾಸು ವರ್ಷಕ್ಕೆ 15 ಲಕ್ಷ ಕೋಟಿ ರೂಪಾಯಿ ಹೂಡಿಕೆ ಕಾರ್ಯಸಾಧ್ಯತೆಯ ಅಂತರ ನಿಧಿಯನ್ನು ಒಳಗೊಂಡಿದೆ. ಮುಂದಿನ ಹಣಕಾಸಿನ ವರ್ಷಕ್ಕೆ ಶಿಕ್ಷಣಕ್ಕಾಗಿ 99,300 ಕೋಟಿ ರೂಪಾಯಿ ಮತ್ತು ಕೌಶಲ್ಯ ಅಭಿವೃದ್ಧಿಗೆ 3200 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಜನರು ತಮ್ಮ ತೆರಿಗೆ ಪಾವತಿಯ ಬಳಿಕ ಹೊರಹೋಗುವ ಖರ್ಚುಗಳನ್ನು ಭರಿಸಿಯೂ ಆದಾಯವನ್ನು ಉಳಿಸಿಕೊಂಡಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಈ ಬಜೆಟ್ ಸರಳೀಕೃತ ಹಾಗೂ ಹೊಸ ತೆರಿಗೆ ನಿಯಮವನ್ನು ಹಳೆಯದಕ್ಕೆ ಪ್ರತಿಯಾಗಿ ಒಂದು ಆಯ್ಕೆಯಾಗಿ ಹೊರತಂದಿದೆ. ಅಲ್ಲದೆ ಐಚ್ಛಿಕ ಫಲಾನುಭವಿಗಳಿಗೆ ವಿನಾಯಿತಿ ಮತ್ತು ಪರಿಹಾರಗಳನ್ನು ಹೆಚ್ಚಿಸಲಾಗಿದೆ. ತೆರಿಗೆದಾರರಲ್ಲಿ ನಂಬಿಕೆಯನ್ನು ಬೆಳೆಸಲು ತೆರಿಗೆ ವಿವಾದಗಳನ್ನು ಕೊನೆಗೊಳಿಸುವ ಪ್ರಯತ್ನವಾಗಿ ವಿವಾದಿತ ತೆರಿಗೆ ಬಾಕಿಗಳನ್ನು ಇತ್ಯರ್ಥಪಡಿಸಲು, ವಿವಾದಿತ ತೆರಿಗೆಗಳ ಮೊತ್ತವನ್ನು ಮಾತ್ರ ಪಾವತಿಸಲು, ಬಡ್ಡಿ ಮತ್ತು ದಂಡವನ್ನು ಜೂನ್ 2020 ರವರೆಗೆ ಅಲ್ಪಾವಧಿಗೆ ಮನ್ನಾ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್ ಟಿ) ಸರಳೀಕೃತ ಜಿಎಸ್ ಟಿ ಪಾವತಿ ಮತ್ತು ಸಂಪೂರ್ಣ ಸ್ವಯಂಚಾಲಿತ ಮರುಪಾವತಿ ಪ್ರಕ್ರಿಯೆಯಿಂದ ರಶೀದಿಗಳನ್ನು ಸ್ಥಿರಗೊಳಿಸಲಾಗಿದೆ.
ಕಂಪೆನಿಗಳು ತಮ್ಮ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಯಲು ಕಳೆದ ಸೆಪ್ಟೆಂಬರ್ನಲ್ಲಿ ಘೋಷಿಸಿದಂತೆ ಹೊಸ ದೇಶೀಯ ಕಂಪನಿಗಳಿಗೆ ರಿಯಾಯಿತಿ ನೀಡಲಾಗುವುದು. ಉತ್ಪಾದನೆಗೆ ಪೂರಕವಾಗಿ ವಿದ್ಯುತ್ ಕ್ಷೇತ್ರಕ್ಕೆ ಕಾರ್ಪೊರೇಟ್ ಆದಾಯ ತೆರಿಗೆ ದರವನ್ನು ಶೇಕಡಾ 15 ರಷ್ಟು ವಿಸ್ತರಿಸಲಾಗುವುದು. ವಿದೇಶಿ ಸರ್ಕಾರಗಳು ಮತ್ತು ಇತರ ವಿದೇಶಿ ಹೂಡಿಕೆಗಳ ಸಾರ್ವಭೌಮ ಸಂಪತ್ತು ನಿಧಿಗಳಿಗೆ (ಎಸ್ಡಬ್ಲ್ಯುಎಫ್) ತೆರಿಗೆ ವಿನಾಯಿತಿ ನೀಡಬೇಕಾದರೆ ತಮ್ಮ ಲಾಭದ 100 ಪ್ರತಿಶತವನ್ನು ಕಡಿತಗೊಳಿಸುವ ಮೂಲಕ ‘ಸ್ಟಾರ್ಟ್-ಅಪ್’ಗೆ ಅಸ್ತಿತ್ವದಲ್ಲಿರುವ ತೆರಿಗೆ ಪ್ರಯೋಜನಗಳನ್ನು ವಹಿವಾಟು ಮಿತಿಯನ್ನು ಹೆಚ್ಚಿಸುವ ಮೂಲಕ ಹೆಚ್ಚಿಸಲಾಗಿದೆ. ಅನಿವಾಸಿ ಹೂಡಿಕೆದಾರರಿಗೆ ಸರ್ಕಾರಿ ಭದ್ರತೆಗಳ ನಿರ್ದಿಷ್ಟ ವರ್ಗಗಳನ್ನು ತೆರೆಯಲಾಗುತ್ತದೆ. ದೇಶೀಯ ಸಾಲ ಮಾರುಕಟ್ಟೆಯನ್ನು ಗಾಢವಾಗಿಸಲು ಕಾರ್ಪೊರೇಟ್ ಬಾಂಡ್ಗಳ ವಿದೇಶಿ ಬಂಡವಾಳ ಹೂಡಿಕೆ (ಎಫ್ಪಿಐ) ಮಿತಿಯನ್ನು 9 ರಿಂದ 15 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ.
ಜಟಿಲ ರಹಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಲೆಕ್ಕಪರಿಶೋಧನೆಗೆ ವಹಿವಾಟು ಮಿತಿಯನ್ನು ಹೆಚ್ಚಿಸಲು ಬಜೆಟ್ ನಲ್ಲಿ ಸಹಕಾರಿ ಸಂಸ್ಥೆಗಳಿಗೆ ರಿಯಾಯಿತಿ ಒದಗಿಸಲಾಗಿದೆ.
ತನ್ನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಧನಸಹಾಯ ಮಾಡಲು 2019-20ರಲ್ಲಿ 65,000 ಕೋಟಿ ರೂಪಾಯಿ ನೀಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಮುಂದಿನ ಹಣಕಾಸು ವರ್ಷದಲ್ಲಿ 2.10 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸುವ ಭರವಸೆಯನ್ನು ಸರ್ಕಾರವು ನೀಡಿದೆ. ಈ ಬಜೆಟ್ ಆರೋಗ್ಯಪೂರ್ಣ ತೆರಿಗೆ ಕಡಿತ ಮಾಡಿ ಮತ್ತು ಉತ್ಪಾದಕ ವಿಭಾಗಗಳಿಗೆ ಹೂಡಿಕೆ ಒದಗಿಸಿ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದೆ. ಮುಂದಿನ ಹಣಕಾಸಿನ ವರ್ಷಕ್ಕೆ ಶೇಕಡಾ 10ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.
ಸ್ಕ್ರಿಪ್ಟ್: ಜಿ. ಶ್ರೀನಿವಾಸನ್, ಹಿರಿಯ ಪತ್ರಕರ್ತ